ಸಿನಿಮಾ - ಮನೋರಂಜನೆ
ಬಹಳ ದಿನಗಳಿಂದ ಇದನ್ನ ಬರೆಯಬೇಕು ಅಂತ ಅನಿಸುತ್ತಾ ಇತ್ತು ಸಮಯ ಕೂಡಿ ಬಂದಿರಲಿಲ್ಲ. ಈ ಲಾಕ್ ಡೌನ್ ಸಮಯದಲ್ಲಿ ಇದರ ಬಗ್ಗೆ ಆಲೋಚಿಸುತ್ತಾ ಕನ್ನಡ ಹಾಗು ಇನ್ನಿತರ ಸಿನಿಮಾಗಳ ಸಮೀಕರಣ - similarities ರಿಮೇಕ್- remake ಸಿನಿಮಾಗಳ, ಗೀತೆಗಳ, ಸನ್ನಿವೇಶಗಳ ಬಗ್ಗೆ ವಿಮರ್ಶಿಸೋಣ ಅಂತ ಈ ಬರೆಹವನ್ನ ಕೈಗೆತ್ತಿಕೊಂಡಿದ್ದೇನೆ. ಇದರಲ್ಲಿ ಯಾವುದೇ ವ್ಯಕ್ತಿಯ, ಸಿನಿಮಾಗಳ ವೈಚಾರಿಕತೆಗೆ ಕುಂದು ತರುವಂತ ಉದ್ದೇಶವಿಲ್ಲ. ಇದು ಬರಿಯ ಮನೋರಂಜನೆಗಾಗಿ ಮತ್ತು ತಿಳುವಳಿಕೆಗಾಗಿ ಅಷ್ಟೇ.
ಕನ್ನಡ ಚಲನಚಿತ್ರ ಎಂದಾಕ್ಷಣ ಮೊದಲಿಗೆ ಡಾ. ರಾಜಕುಮಾರ್ ಅವರ ಸಿನಿಮಾಗಳಿಂದಲೇ ಆರಂಭಿಸೋಣ.
ಆಸ್ಕರ್ ಪ್ರಶಸ್ತಿಗೆ ಹೊರಟ 1957 ರ ಹಿಂದಿಯ ಚಿತ್ರ "ಮದರ್ ಇಂಡಿಯಾ" ಇದರಲ್ಲಿ ಬರುವ ಸನ್ನಿವೇಶಗಳು, 4 ಪಾತ್ರಧಾರಿಗಳು ಯಥಾವತ್ತಾಗಿ ಇಳಿದದ್ದು 1974ರ ಕನ್ನಡದ "ಸಂಪತ್ತಿಗೆ ಸವಾಲ್" ಚಿತ್ರದಲ್ಲಿ.
"ಓ.. ನಲ್ಲನೆ ಸವಿಮಾತೊಂದ ನುಡಿವೆಯಾ" ಹಾಡಂತೂ ಸದಾ ಗುನುಗುನಿಸುವ ಹಾಡೇ ಸರಿ. ಭವಾನಿ-ರಜನೀ ಕಾಂತ್ ಅಭಿನಯದ ಈ ಹಾಡು ಕೇಳಲಷ್ಟೇ ಅಲ್ಲದೆ ನೋಡಲೂ ಸುಂದರ ಗೀತೆ. ಇದೇ ಭಾವ ಸಾರಂಶವಿರುವ ಹಾಡು ಹಿಂದಿಯಲ್ಲಿ "ಹಾಥ್ ಕೀ ಸಫಾಯಿ" ಚಿತ್ರದಲ್ಲಿ "ವಾದಾ ಕರ್ ಲೇ ಸಾಜ್ನಾ...." ಎಂಬ ಗೀತೆಯಾಗಿ ಮೂಡಿ ಬಂದಿದೆ. ಹಿಂದಿ ಚಿತ್ರವೂ ಅಷ್ಟೇ ನಮ್ಮ "ಸಹೋದರರ ಸವಾಲ್" ಚಿತ್ರದ ರಿಮೇಕ್. ಎರಡೂ ಹಾಡುಗಳು ಸುಂದರ ಸುಮಧುರ.
ಬಹಳ ದಿನಗಳಿಂದ ಇದನ್ನ ಬರೆಯಬೇಕು ಅಂತ ಅನಿಸುತ್ತಾ ಇತ್ತು ಸಮಯ ಕೂಡಿ ಬಂದಿರಲಿಲ್ಲ. ಈ ಲಾಕ್ ಡೌನ್ ಸಮಯದಲ್ಲಿ ಇದರ ಬಗ್ಗೆ ಆಲೋಚಿಸುತ್ತಾ ಕನ್ನಡ ಹಾಗು ಇನ್ನಿತರ ಸಿನಿಮಾಗಳ ಸಮೀಕರಣ - similarities ರಿಮೇಕ್- remake ಸಿನಿಮಾಗಳ, ಗೀತೆಗಳ, ಸನ್ನಿವೇಶಗಳ ಬಗ್ಗೆ ವಿಮರ್ಶಿಸೋಣ ಅಂತ ಈ ಬರೆಹವನ್ನ ಕೈಗೆತ್ತಿಕೊಂಡಿದ್ದೇನೆ. ಇದರಲ್ಲಿ ಯಾವುದೇ ವ್ಯಕ್ತಿಯ, ಸಿನಿಮಾಗಳ ವೈಚಾರಿಕತೆಗೆ ಕುಂದು ತರುವಂತ ಉದ್ದೇಶವಿಲ್ಲ. ಇದು ಬರಿಯ ಮನೋರಂಜನೆಗಾಗಿ ಮತ್ತು ತಿಳುವಳಿಕೆಗಾಗಿ ಅಷ್ಟೇ.
ಕನ್ನಡ ಚಲನಚಿತ್ರ ಎಂದಾಕ್ಷಣ ಮೊದಲಿಗೆ ಡಾ. ರಾಜಕುಮಾರ್ ಅವರ ಸಿನಿಮಾಗಳಿಂದಲೇ ಆರಂಭಿಸೋಣ.
ಆಸ್ಕರ್ ಪ್ರಶಸ್ತಿಗೆ ಹೊರಟ 1957 ರ ಹಿಂದಿಯ ಚಿತ್ರ "ಮದರ್ ಇಂಡಿಯಾ" ಇದರಲ್ಲಿ ಬರುವ ಸನ್ನಿವೇಶಗಳು, 4 ಪಾತ್ರಧಾರಿಗಳು ಯಥಾವತ್ತಾಗಿ ಇಳಿದದ್ದು 1974ರ ಕನ್ನಡದ "ಸಂಪತ್ತಿಗೆ ಸವಾಲ್" ಚಿತ್ರದಲ್ಲಿ.
ವಿಧವೆ ತಾಯಿ, ಆಕೆಗೆ ಇಬ್ಬರು ಮಕ್ಕಳು ಒಬ್ಬ ಪುಂಡ, ಮತ್ತೊಬ್ಬ ವಿಧೇಯ ಮಗ. ಪುಂಡ ಮಗನನ್ನು ರೇಗಿಸುವ ಜಗಳಗಂಟಿ ಕುಲಕರ್ಣಿಯ ಮಗಳು. ಈ ನಾಲ್ಕು ಪಾತ್ರಗಳು "ಧುತ್ತರಗಿ" ಅವರ ನಾಟಕದಲ್ಲಿ ಸೇರಿ ಹೋಗಿವೆ. ಕೆಲ ಸನ್ನಿವೇಷಗಳಂತೂ ಭಟ್ಟಿ ಇಳಿಸಿದಂತಿವೆ.
ನರ್ಗಿಸ್ - ಎಂ. ವಿ. ರಾಜಮ್ಮ, ರಾಜೇಂದ್ರಕುಮಾರ್ - ರಾಜ ಶಂಕರ್,
ಸುನಿಲ್ ದತ್ತ್ - ರಾಜ್ ಕುಮಾರ್, ಚಂಚಲ್ - ಮಂಜುಳಾ ಪಾತ್ರಗಳು ಒಂದೇ ರೀತಿಯಾಗಿವೆ.
"ಮದರ್ ಇಂಡಿಯಾ" ಮಹಿಳಾ ಪ್ರಧಾನವಾಗಿದ್ದರೆ, "ಸಂಪತ್ತಿಗೆ ಸವಾಲ್" ಪುರುಷ ಪ್ರಧಾನ ಚಿತ್ರ. ಒಮ್ಮೆ ಎರಡೂ ಚಿತ್ರಗಳನ್ನ ನೋಡಿ ಆನಂದಿಸಿ.
=========
ಹಾಗೆ ಮತ್ತೊಂದು ಚಿತ್ರ ಹಿಂದಿಯ 1952 ರ ದಿಲೀಪ್ ಕುಮಾರ್ ಚಿತ್ರ "ಆನ್" ಮತ್ತು 1976 ರ ರಾಜ್ ಕುಮಾರ ರ "ಬಹಾದುರ್ ಗಂಡು" ಚಿತ್ರ. ಇದು ಅಪ್ಪಟ ರಿಮೇಕ್ ಅಂತಲೇ ಹೇಳಬಹುದು. ಷೇಕ್ಸ್ಪಿಯರ್ ನ ನಾಟಕವೊಂದರ ಆಧಾರಿತ ಹಿಂದಿ ಚಿತ್ರದ ದಿಲೀಪ್ ಕುಮಾರ್, ನಿಮ್ಮಿ, ನಾದಿರಾ ಹಾಗು ಪ್ರೇಮ್ ನಾಥ್ ಪಾತ್ರಗಳನ್ನ ರಾಜ್ ಕುಮಾರ್, ಆರತಿ, ಜಯಂತಿ ಹಾಗು ವಜ್ರಮುನಿ ಸೂಪರ್ ಹಿಟ್ ಆಗುವಂತೆ ನಟಿಸಿದ್ದಾರೆ.
ಹಲವು ಸನ್ನಿವೇಶಗಳು, ಗೀತೆಗಳು ಸಂಪೂರ್ಣವಾಗಿ ಹಿಂದಿ ಚಿತ್ರದಂತೆಯೇ ಮೂಡಿ ಬಂದಿದೆ.
ಯಾವುದಕ್ಕೂ ತುಲನೆ ಮಾಡಿ ನೋಡಬೇಡಿ, ಆಯಾ ಚಿತ್ರಗಳಲ್ಲಿ ಅದರದ್ದೇ ವೈಶಿಷ್ಟ್ಯಗಳಿವೆ
ಆಯಾ ಕಾಲಕ್ಕೆ ತಕ್ಕಂತೆ ಮಾರ್ಪಾಡುಗೊಂಡಿವೆ.
=========
ಕನ್ನಡದ್ದೇ ಚಿತ್ರ ಮತ್ತೆ ಕನ್ನಡದಲ್ಲಿಯೇ ಅಲ್ಪ ಸ್ವಲ್ಪ ಬದಲಾವಣೆಗೊಂಡು ತೆರೆಗೆ ಬಂದಿದೆಯೆಂದರೆ ಆಶ್ಚರ್ಯವೇ ಸರಿ. 1952 ರ "ಪೆಳ್ಳಿ ಚೇಸಿ ಚೂಡು" ನ ರಿಮೇಕ್ 1965 ರ "ಮದುವೆ ಮಾಡಿ ನೋಡು" ಚಿತ್ರ 1984 ರಲ್ಲಿ "ಶ್ರಾವಣ ಬಂತು" ಚಿತ್ರವಾಗಿ ತೆರೆಗೆ ಬಂದಿತು.
hi
ಅಲ್ಲಿ ವರದಕ್ಷಿಣೆ ವಿಷಯ ಇದ್ದರೆ "ಶ್ರಾವಣ ಬಂತು" ಚಿತ್ರದಲ್ಲಿ ಜಾತೀಯತೆ ಆಧಾರಿತ ಚಿತ್ರವಾಗಿತ್ತು. ನರ್ಸ್(ಸರಸ್ವತಿ) ಎರಡೂ ಚಿತ್ರದಲ್ಲೂ (ಲೀಲಾವತಿ-ಊರ್ವಶಿ) ಕಾಣಿಸಿಕೊಂಡಿದ್ದಾಳೆ. ನಾಯಕ ಹುಚ್ಚನಾಗಿ ಡಾ. ರಾಜ್ ಅಮೋಘ ಅಭಿನಯವುಂಟು. ಎರಡೂ ಚಿತ್ರಗಳು ಸೂಪರ್ ಡೂಪರ್ ಚಿತ್ರಗಳೇ. ಹಾಡುಗಳಂತೂ ಎವರ್ ಗ್ರೀನ್.
===========
==========
"ಬಾ ನಲ್ಲೆ ಮಧುಚಂದ್ರಕೆ..." ಎಂದಾಕ್ಷಣ "ಆ ಬೆಟ್ಟದಲ್ಲಿ.. ಬೆಳದಿಂಗಳಲ್ಲಿ ..." ಎಂಬ ಸಿದ್ಧಲಿಂಗಯ್ಯ ನವರ ಕವಿತೆ ಚಿತ್ರಗೀತೆಯಾಗಿ ಹಂಸಲೇಖ ರ ಸಂಗೀತದಲ್ಲಿ ಸುಮಧುರವಾಗಿ ಬಂದದ್ದು ನೆನಪಾಗ್ತಿದೆ. 1993 ರಲ್ಲಿ ಬಿಡುಗಡೆಯಾದ ಸುಮಾರು 9 ವರ್ಷದ ನಂತರ ಅದೇ ಗೀತೆಯ ಸಾರಾಂಶವೆನಿಸುವ ಹಿಂದಿಯ ಗೀತೆ 2002 ರಲ್ಲಿ "ಸಾಥಿಯ...ಮರ್ದಮ್ ಮರ್ದಮ್ ತೇರಿ ಗೀಲಿ ಹಸೀನ್ ... " ಗುಲ್ಜಾರ್ ರ ಹಾಡು "ಸಾಥಿಯಾ" ಚಿತ್ರದಲ್ಲಿ ಫಿಲಂಫೇರ್ ಪ್ರಶಸ್ತಿ ಪಡೆಯಿತು. ಎರಡೂ ಗೀತೆಗಳಲ್ಲಿ ಒಂದೇ ತೆರನಾದ ಸಾಹಿತ್ಯ, ಭಾವ ಸನ್ನಿವೇಶಗಳು ಮೂಡಿವೆ. ಆದರೆ ಅದರ ಕಾಪಿರೈಟ್ ಹಕ್ಕು ಯಾರಿಗೂ ಸೇರಿಲ್ಲ. ಮೊದಲು ಇದು ಕನ್ನಡದಲ್ಲಿ ಬಂದದ್ದು ಅಂತ ಹೆಮ್ಮೆ
==========
ಪುನೀತ್ ಚಿತ್ರ "ಅರಸು", ಗೀತೆ "ಪ್ರೀತಿ.. ಪ್ರೀತಿ"ಯಲ್ಲಿನ ಕೆಲವು ಸಾಲುಗಳು 2000 ದ ಹಿಂದಿ ಚಿತ್ರ "ಪುಕಾರ್", "ಕಿಸ್ಮತ್ ಸೆ ತುಮ್ ಹಮ್ ಕೋ ಮಿಲೇ ಹೊ" ಎಂಬ ಗೀತೆಯಿಂದ ಆರಿಸಿ ತಂದದ್ದು.
"ಒಂದು ಭಾವ ಮತ್ತೊಂದು ಕವಿತೆ..." ಈ ಸಾಲನ್ನು ಕೇಳಿದರೆ ತಿಳಿಯುವುದು. ಅಲ್ಲವಾ ಸೇಮ್ ಟು ಸೇಮ್.
=================
"ಏಹ್ ದಿಲ್ ದೀವಾನಾ ಹೈ , ದೀವಾನಾ ದಿಲ್ ಹೈ... " ಇದು 1970 ರ "ಇಷ್ಕ್ ಪರ್ ಜೋರ್ ನಹಿ" ಚಿತ್ರದ್ದು. ಇದೆ ರೀತಿಯ ರಾಗವಿರುವ ಹಾಡು ಕನ್ನಡದಲ್ಲಿ "ಕಸ್ತೂರಿ ನಿವಾಸ" ದ "ನೀ ಬಂದು ನಿಂತಾಗ, ನಿಂತು ನೀ ನಕ್ಕಾಗ, ಸೋತೆ ನಾನಾಗ" ಎಂದಾಗಿದೆ.
ಸಂಗೀತ ನಿರ್ದೇಶಕ ಜಿ. ಕೆ. ವೆಂಕಟೇಶ್ ಒಂದು ಸಂದರ್ಶನದಲ್ಲಿ ಹಿಂದಿ ಗೀತೆಯಿಂದ ಸ್ಫೂರ್ತಿ ಪಡೆದದ್ದು ಎಂದು ಹೇಳಿಕೊಂಡಿದ್ದಾರೆ. ಎರಡೂ ಗೀತೆಗಳು ಸೂಪರ್.
==========================
ಅನಂತ್-ಲಕ್ಷ್ಮಿಸೂಪರ್ ಜೋಡಿಯ ಸೂಪರ್ ಹಾಡು "ಮಿಲನ ಕಾಣದು ಭೂಮಿ ಬಾನು", "ಮುದುಡಿದ ತಾವರೆ ಅರಳಿತು" ಚಿತ್ರದಲ್ಲಿದೆ. ಅದೇ ರಾಗದ ಜಯ ಬಾಧುರಿ ನಟನೆಯ "ಮೇರಾ ಜೀವನ್ ಕೋರ ಕಾಗಜ್ ಕೋರಾ ಹಿ ರಹೇ ಗಯಾ" ಗೀತೆ "ಕೋರ ಕಾಗಜ್" ಚಿತ್ರದಲ್ಲಿ ಮೂಡಿದೆ. ನೋಡಿ ...ಎರಡೂ ದುಃಖ ಗೀತೆಗಳೇ
======================
"ಮೇರೇ ಅಂಗನೆ ಮೇ ತುಮ್ಹಾರಾ ಕ್ಯಾ ಕಾಮ್ ಹೈ" ಈ ಸೂಪರ್ ಹಾಡು ಯಾರು ಕೇಳಿಲ್ಲ ಇದನ್ನು ಕದ್ದು ತಂದದ್ದು ಕನ್ನಡದಿಂದ. ಹಾಡು ಪೂರ್ತಿಯಾಗಿ ನೆನಪು ಬರ್ತಿಲ್ಲ ಚಿತ್ರ "ಕೆಸರಿನ ಕಮಲ" . ಚರಣದಲ್ಲಿ "ಇವಳ ಹೆಸರು ರೂಪ, ಕಣ್ಣು ಹೊಳೆವ ದೀಪ... ಅಯ್ಯಯ್ಯೋ ಈ ಹುಡುಗಿ ಉದ್ದ... ಉದ್ದಗಿದ್ದರೆ ಏನಂತೆ ಏಣಿಯೇ ಬೇಡ ನಿನಗಂತೇ" ಇಂತಿದೆ. ವಿಡಿಯೋ ಸಿಕ್ಕರೆ ಹಾಕುವೆ ಅಲ್ಲಿಯವರೆಗೂ ಅಮಿತಾಬ್ ನ ಈ ವಿಡಿಯೋ ನೋಡಿ
================
No comments:
Post a Comment